ಮುಂಡಿತ್ತಡ್ಕ ; ಶಾಲಾ ವಾರ್ಷಿಕೋತ್ಸವ ಹಾಗೂ ವಿದಾಯ ಸಮಾರಂಭ
ತಾ . ೨೮-೦೨-೨೦೧೫ ನೇ ಶನಿವಾರ ಶ್ರೀ ಮಂಜಯ್ಯ ಮೆಮೋರಿಯಲ್ ಎ . ಯು . ಪಿ .ಶಾಲೆ ಮುಂಡಿತ್ತಡ್ಕದ ವಾರ್ಷಿಕೋತ್ಸವವು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರಗಿತು . ಪಿ . ಟಿ . ಎ . ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರವರು ಧ್ವಜಾರೋಹಣ ಗೈದರು . ಬಳಿಕ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀಮತಿ ಬುಶ್ರಾ ಸಿದ್ದಿಕ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು . ಮುಖ್ಯ ಶಿಕ್ಷಕಿ ಪದ್ಮಾವತಿಯವರು ವರದಿಯನ್ನು ವಾಚಿಸಿದರು . ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಸದಾಶಿವ ನಾಯಕ್ ಹಾಗೂ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಗಳಾದ ಶ್ರೀ ಕೈಲಾಸ ಮೂರ್ತಿಯವರು ಉಪಸ್ಥಿತರಿದ್ದರು . ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಯಾದ ಶ್ರೀ ಪಿ . ಸುಂದರ ಪುರುಷ ರವರಿಗೆ ವಿದಾಯ ಕೋರಲಾಯಿತು . ಸಮಾರಂಭದಲ್ಲಿ ಶ್ರೀ ಯಸ್. ನಾರಾಯಣ[ಸದಸ್ಯರು, ಪುತ್ತಿಗೆ ಗ್ರಾಮ ಪಂಚಾಯತು] ಶ್ರೀ ಜೋನಿ ಕ್ರಾಸ್ತ [ಸದಸ್ಯರು,ಬದಿಯಡ್ಕ ಗ್ರಾಮ ಪಂಚಾಯತು], ಶ್ರೀ ಪಿ. ಜನಾರ್ದನ[ಶಾಲಾ ವ್ಯವಸ್ಥಾಪಕರು], ಶ್ರೀಮತಿ ಯನ್. ವಿಜಯಲಕ್ಷ್ಮಿ[ನಿವ್ರತ್ತ ಮುಖ್ಯ ಶಿಕ್ಷಕಿ], ಶ್ರೀ ಕೆ. ಯಚ್. ಜನಾರ್ಧನ ನಾಯಕ್[ನಿವ್ರತ್ತ ಶಿಕ್ಷಕರು], ಶ್ರೀಮತಿ ಯಂ. ಕಮಲಾಕ್ಷಿ[ನಿವೃತ್ತ ಮುಖ್ಯ ಶಿಕ್ಷಕಿ], ಶ್ರೀ ಸಂತೋಷ್ ಕುಮಾರ್[ಪಿ. ಟಿ.ಎ. ಅಧ್ಯಕ್ಷರು] ,ಶ್ರೀ ಯಸ್.ಉದಯಭಾನು[ಸ್ಟಾಫ್ ಸೆಕ್ರಟರಿ] ಶುಭಾಶಂಸನೆಗೈದರು. ಶಾಲಾ ಅಧ್ಯಾಪಕರಾದ ಶ್ರೀ ಗಣೇಶ್ ಕಾಮತ್ ರವರು ಸ್ವಾಗತಿಸಿ, ಶ್ರೀ ವಿಜಯಕುಮಾರ್ ಕೆ. ವಿ. ವಂದಿಸಿದರು. ಶಿಕ್ಷಕರಾದ ಉಮಾನಾಥ ಭಂಡಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು.
ಮುಖ್ಯ ಶಿಕ್ಷಕಿಯವರು ಶಾಲಾ ವಾರ್ಷಿಕ ವರದಿಯನ್ನು ವಾಚಿಸುತ್ತಿರುವುದು ...
ಸಭಾಧ್ಯಕ್ಷ ಸ್ಥಾನದಿಂದ ಭಾಷಣ ಮಾಡುತ್ತಿರುವ ಪಿ ಟಿ ಎ ಅಧ್ಯಕ್ಷರು ...
ಸುದೀರ್ಘ ಕಾಲ ಶಾಲಾ ಸಿಬಂದಿಯಾಗಿ ಸೇವೆ ಸಲ್ಲಿಸಿದ ಶ್ರೀಯುತ ಸುಂದರ
ಪುರುಷರವರು ಶಾಲೆಗೆ ಉದಾರವಾಗಿ ಕೊಡುಗೆ ನೀಡುತ್ತಿರುವುದು ...
ಮಕ್ಕಳ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳು ...
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸುತ್ತಿರುವುದು ....