ಮುಂಡಿತ್ತಡ್ಕ ಶಾಲಾ ವಾರ್ಷಿಕೋತ್ಸವ
ಮುಂಡಿತ್ತಡ್ಕ : 2016-17 ನೇ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಮುಂಡಿತ್ತಡ್ಕ ಶಾಲೆಯಲ್ಲಿ ನಡೆಯಿತು . ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯರಾದ ಶ್ರೀ ಅಬೂಬಕರ್ ಸಿದ್ದಿಕ್ ರವರು ವಹಿಸಿದ್ದರು .
ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ರವರು ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಶ್ರೀ ಪಿ ಜನಾರ್ದನ ಮಾಸ್ಟರ್ (ನಿವೃತ್ತ ಮುಖ್ಯೋಪಾಧ್ಯರು ಹಾಗು ನಿವೃತ್ತ ವ್ಯವಸ್ಥಾಪಕರು) , ಶ್ರೀ ಯಸ್ ಉದಯಭಾನು (ನಿವೃತ್ತ ಸಂಸ್ಕೃತ ಉಪಾಧ್ಯಾಯರು ), ಕೆ ಕೃಷ್ಣ ಭಟ್ (ನಿವೃತ್ತ ಅಧ್ಯಾಪಕರು ), ಶ್ರೀ ಕುಂಞಲಿ (ಪಿ ಟಿ ಎ ಅಧ್ಯಕ್ಷರು ),ಶ್ರೀ ಮತಿ ರೇವತಿ (ಯಂ ಪಿ ಟಿ ಎ ಅಧ್ಯಕ್ಷೆ ) , ಮೊದಲಾದವರು ಶುಭಾಸಂಸನೆ ಗೈದರು. ಪದ್ಮನಾಭ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಯುತ ಗಣೇಶ್ ಕಾಮತ್ ರವರು ಸ್ವಾಗತಿಸಿ ,ಪ್ರಶಾಂತ್ ರೈ ಮಾಸ್ಟರ್ ರವರು ವಂದಿಸಿದರು . ಉಪಜಿಲ್ಲಾ ಹಾಗು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಹಾಗೂ 2015-16ನೇ ವರ್ಷದ ಯಸ್ ಯಸ್ ಎಲ್ ಸಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ A +ಗ್ರೇಡ್ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ತ್ರೋ ಬಾಲ್ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಾಲಾ ಹಳೆ ವಿದ್ಯಾರ್ಥಿ ಗುಣಕರ ಇವರನ್ನು ಅಭಿನಂದಿಸಲಾಯಿತು .
ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ರವರು ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಶ್ರೀ ಪಿ ಜನಾರ್ದನ ಮಾಸ್ಟರ್ (ನಿವೃತ್ತ ಮುಖ್ಯೋಪಾಧ್ಯರು ಹಾಗು ನಿವೃತ್ತ ವ್ಯವಸ್ಥಾಪಕರು) , ಶ್ರೀ ಯಸ್ ಉದಯಭಾನು (ನಿವೃತ್ತ ಸಂಸ್ಕೃತ ಉಪಾಧ್ಯಾಯರು ), ಕೆ ಕೃಷ್ಣ ಭಟ್ (ನಿವೃತ್ತ ಅಧ್ಯಾಪಕರು ), ಶ್ರೀ ಕುಂಞಲಿ (ಪಿ ಟಿ ಎ ಅಧ್ಯಕ್ಷರು ),ಶ್ರೀ ಮತಿ ರೇವತಿ (ಯಂ ಪಿ ಟಿ ಎ ಅಧ್ಯಕ್ಷೆ ) , ಮೊದಲಾದವರು ಶುಭಾಸಂಸನೆ ಗೈದರು. ಪದ್ಮನಾಭ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಯುತ ಗಣೇಶ್ ಕಾಮತ್ ರವರು ಸ್ವಾಗತಿಸಿ ,ಪ್ರಶಾಂತ್ ರೈ ಮಾಸ್ಟರ್ ರವರು ವಂದಿಸಿದರು . ಉಪಜಿಲ್ಲಾ ಹಾಗು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಹಾಗೂ 2015-16ನೇ ವರ್ಷದ ಯಸ್ ಯಸ್ ಎಲ್ ಸಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ A +ಗ್ರೇಡ್ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ತ್ರೋ ಬಾಲ್ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಾಲಾ ಹಳೆ ವಿದ್ಯಾರ್ಥಿ ಗುಣಕರ ಇವರನ್ನು ಅಭಿನಂದಿಸಲಾಯಿತು .