Wednesday 21 December 2016
Thursday 8 December 2016
ಹರಿತ ಕೇರಳ ವಾರಾಚರಣೆ
SMMAUPS MUNDITHADKA
'ನವಕೇರಳ' ಸೃಷ್ಟಿ ಎಂಬ ಘೋಷಣೆಯೊಂದಿಗೆ ನಾಡಿನ ನೆಲ ಜಲ ಸಂರಕ್ಷಣೆಯ ಮಹತ್ತರವಾದ ಗುರಿಯನ್ನು ಸಾಧಿಸಲು ಕೇರಳ ಸರಕಾರವು ಜಾರಿಗೊಳಿಸುತ್ತಿರುವ ಹರಿತ ಕೇರಳ ಪದ್ದತಿಯ ಅಂಗವಾಗಿ ನಮ್ಮ ಶಾಲೆಯಲ್ಲಿ ತಾರೀಕು 5.12.2016 ರಿಂದ 8.12.2016ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಲ ಸಂರಕ್ಷಣೆ,ಪರಿಸರ ಸಂರಕ್ಷಣೆ, ಕೃಷಿ ಅಭಿವೃದ್ಧಿ ಹಾಗು ಪರಿಸರ ಶುಚಿತ್ವದ ಗುರಿಯೊಂದಿಗೆ ಸ್ವಚ್ಛ ಸುಂದರ ಕೇರಳವನ್ನು ಭಾವಿ ಜನಾಂಗಕ್ಕೆ ಉಳಿಸುವ ನಿಟ್ಟಿನಲ್ಲಿ ಕಾರ್ಯಗತಗೊಳಿಸುತ್ತಿರುವ ಹರಿತ ಕೇರಳ ಮಿಷನ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ನಡೆಸಲಾಯಿತು.
ತಾ 5.12.2016 ರಂದು ಶಾಲಾ ಅಸ್ಸೆಂಬ್ಳಿಯಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಉಮಾನಾಥ ಭಂಡಾರಿಯವರು ಕೇರಳ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹಸಿರು ಕೇರಳ ಯೋಜನೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಮೂಡಿಸಲು ತರಗತಿಯಲ್ಲಿ ಮಾಹಿತಿಯನ್ನು ನೀಡಲಾಯಿತು. ಇದರ ಮುಂದುವರಿದ ಚಟುವಟಿಕೆಯ ಭಾಗವಾಗಿ ತಾ. 6.12.2016 ರಂದು ವಿದ್ಯಾರ್ಥಿಗಳಿಗೆ ಪ್ರಬಂಧರಚನಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಪರಿಸರ ಸಂರಕ್ಷಣಾ ದಿನದ ಅಂಗವಾಗಿ ತಾ.7.12.2016ರಂದು ಮಕ್ಕಳಿಗೆ ಚಿತ್ರರಚನಾ ಸ್ಪರ್ಧೆಯನ್ನು ನಡೆಸಲಾಯಿತು.
ತಾ. 8.12.2016ರಂದು ಶಾಲಾ ಅಸ್ಸೆಂಬ್ಳಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನಾ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಶಾಲಾ ಮುಖ್ಯೋಪಾದ್ಯಾಯರು ಪ್ರತಿಜ್ಞೆಯನ್ನು ಮಕ್ಕಳಿಗೆ ಬೋಧಿಸಿದರು. ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ಪ್ಲಾಸ್ಟಿಕ್ ಮಾಲಿನ್ಯವು ಉಂಟು ಮಾಡುವ ಪರಿಸರ ಸಮಸ್ಯೆಗಳ ಕುರಿತು ಮಾತಾಡಿದರು.
Tuesday 11 October 2016
ಶಾರದಾ ಪೂಜೆ ಆಚರಣೆ
ಮುಂಡಿತ್ತಡ್ಕ : ಶ್ರೀ ಮಂಜಯ್ಯ ಸ್ಮಾರಕ ಶಾಲೆಯಲ್ಲಿ ಶಾರದಾ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮವು ಪ್ರಾರಂಭವಾಗಿ ೧೨ ಘಂಟೆಗೆ ಮಹಾಪೂಜೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಶಾಲಾ ವ್ಯವಸ್ಥಾಪಕರಾದ ಶ್ರೀ ಯುತ ಜನಾರ್ದನ ಮಾಸ್ಟರ್ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿದರು.
ನಂತರ ಭಗವದ್ಗೀತಾ ವಾಚನವನ್ನು ಮಾಡಿದರು.
ಪೂಜೆಯಲ್ಲಿ ವಿದ್ಯಾರ್ಥಿಗಳು,ರಕ್ಷಕರು,ಶಿಕ್ಷಕರು,ಊರ ಮಹನೀಯರು ಪಾಲ್ಗೊಂಡರು.ಅಧ್ಯಾಪಕರಾದ ಶ್ರೀ ಗಣೇಶ್ ಕಾಮತ್ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಯಿತು.
Subscribe to:
Posts (Atom)