Thursday 27 October 2016
Tuesday 11 October 2016
ಶಾರದಾ ಪೂಜೆ ಆಚರಣೆ
ಮುಂಡಿತ್ತಡ್ಕ : ಶ್ರೀ ಮಂಜಯ್ಯ ಸ್ಮಾರಕ ಶಾಲೆಯಲ್ಲಿ ಶಾರದಾ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮವು ಪ್ರಾರಂಭವಾಗಿ ೧೨ ಘಂಟೆಗೆ ಮಹಾಪೂಜೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಶಾಲಾ ವ್ಯವಸ್ಥಾಪಕರಾದ ಶ್ರೀ ಯುತ ಜನಾರ್ದನ ಮಾಸ್ಟರ್ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿದರು.
ನಂತರ ಭಗವದ್ಗೀತಾ ವಾಚನವನ್ನು ಮಾಡಿದರು.
ಪೂಜೆಯಲ್ಲಿ ವಿದ್ಯಾರ್ಥಿಗಳು,ರಕ್ಷಕರು,ಶಿಕ್ಷಕರು,ಊರ ಮಹನೀಯರು ಪಾಲ್ಗೊಂಡರು.ಅಧ್ಯಾಪಕರಾದ ಶ್ರೀ ಗಣೇಶ್ ಕಾಮತ್ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಯಿತು.
Subscribe to:
Posts (Atom)