ರಕ್ಷಕ ಶಿಕ್ಷಕ ಮಹಾಸಭೆ
ಮುಂಡಿತ್ತಡ್ಕ : ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ ಎ. ಯು . ಪಿ ಶಾಲೆಯ ಈ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ತಾ :27.07.16ನೇ ಬುಧವಾರ ಅಪರಾಹ್ನ 2 ಘಂಟೆಗೆ ಸರಿಯಾಗಿ ಪಿ . ಟಿ . ಎ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು . ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸುತ್ತಾ ಮಾತನಾಡಿದ ಪಂಚಾಯತು ಸದಸ್ಯ ಶ್ರೀ ಅಬೂಬಕ್ಕರ್ ಸಿದ್ದಿಕ್ ಅವರು "ಮಕ್ಕಳ ಅಭಿವೃದ್ಧಿಯ ಜತೆಗೆ ಶಾಲೆಯ ಅಭಿವೃದ್ಧಿಯು ಸಾಧ್ಯ . ಶಾಲೆಯ ಎಲ್ಲಾ ಕಾರ್ಯ ಚಟುವಟಿಕೆಯಲ್ಲೂ ಹೆತ್ತವರ ಪಾಲು ಬಲು ಮುಖ್ಯ . ಅದಕ್ಕಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಹೆತ್ತವರು ಪಾಲ್ಗೊಳ್ಳಬೇಕು . ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಾತ್ರರಾಗಬೇಕು ಎಂದರು .
ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಜನಾರ್ದನ ಮಾಸ್ಟರ್ ಅವರು "ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಶಾಲೆಯನ್ನು ಉಳಿಸಿ ಬೆಳೆಸುವುದು ತಮ್ಮೆಲ್ಲರ ಕರ್ತವ್ಯ . ಅದಕ್ಕಾಗಿ ಶಾಲೆಯಲ್ಲಿ ಹಮ್ಮಿಕೊಂಡ ಪ್ರತೀ ಚಟುವಟಿಕೆಯನ್ನೂ ಯಶಸ್ವಿಯಾಗಿ ನಿರ್ವಹಿಸಲು ಹೆತ್ತವರು ಸಹಕರಿಸಬೇಕೆಂದು ತಿಳಿಸಿದರು . ಎಂ . ಪಿ .ಟಿ .ಎ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ ಅವರು ಶುಭ ಹಾರೈಸಿದರು . ಅಧ್ಯಾಪಕರಾದ ಶ್ರೀ ಪದ್ಮನಾಭ ನಾಯಕ್ ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಯಲ್ಲಿ ಈ ವರ್ಷ ಕೈಗೊಳ್ಳುವ ಚಟುವಟಿಕೆಗಳ ಕುರಿತು ತೀರ್ಮಾನಗಳ ಕುರಿತು ಸವಿವರವಾಗಿ ವಿವರಿಸಿದರು . ಸಭೆಯಲ್ಲಿ ನೂತನ ವರ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು . ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಕುಂಞಲಿ ಎಂ ಪಿ ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ ಯಂ ಅವರು ಅವಿರೋದವಾಗಿ ಆಯ್ಕೆಯಾದರು . ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶಾಲಾ ವ್ಯವಸ್ಥಾಪಕರ ಹಾಗೂ ಶಾಲಾ ವತಿಯಿಂದ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು .
ಅಧ್ಯಾಪಕ ಶ್ರೀ ಗಣೇಶ್ ಕಾಮತ್ ಸ್ವಾಗತಿಸಿ ,ಶ್ರೀ ಸಂತೋಷ್ ಕುಮಾರ್ ವಂದಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಉಮಾನಾಥ ಭಂಡಾರಿ ಗತ ವರ್ಷದ ವರದಿ ವಾಚಿಸಿದರು .