FIRST TERM EXAMINATION WILL BE STARTING FROM 21ST OF THIS MONTH.......

Wednesday 27 July 2016

P.T.A. MEETING ON 27-07-2016

ರಕ್ಷಕ ಶಿಕ್ಷಕ  ಮಹಾಸಭೆ 

                     ಮುಂಡಿತ್ತಡ್ಕ :   ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ ಎ. ಯು . ಪಿ ಶಾಲೆಯ  ಈ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ  ಸಂಘದ  ಮಹಾಸಭೆಯು  ತಾ :27.07.16ನೇ ಬುಧವಾರ ಅಪರಾಹ್ನ 2  ಘಂಟೆಗೆ ಸರಿಯಾಗಿ ಪಿ . ಟಿ . ಎ ಅಧ್ಯಕ್ಷ  ಶ್ರೀ ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು . ಸಭೆಯನ್ನು   ಔಪಚಾರಿಕವಾಗಿ  ಉದ್ಘಾಟಿಸುತ್ತಾ  ಮಾತನಾಡಿದ   ಪಂಚಾಯತು  ಸದಸ್ಯ  ಶ್ರೀ  ಅಬೂಬಕ್ಕರ್  ಸಿದ್ದಿಕ್   ಅವರು  "ಮಕ್ಕಳ  ಅಭಿವೃದ್ಧಿಯ  ಜತೆಗೆ  ಶಾಲೆಯ  ಅಭಿವೃದ್ಧಿಯು  ಸಾಧ್ಯ .  ಶಾಲೆಯ  ಎಲ್ಲಾ  ಕಾರ್ಯ ಚಟುವಟಿಕೆಯಲ್ಲೂ  ಹೆತ್ತವರ   ಪಾಲು   ಬಲು ಮುಖ್ಯ .  ಅದಕ್ಕಾಗಿ ಎಲ್ಲಾ  ಕಾರ್ಯಕ್ರಮದಲ್ಲೂ  ಹೆತ್ತವರು  ಪಾಲ್ಗೊಳ್ಳಬೇಕು . ಶಾಲೆಯ  ಸರ್ವತೋಮುಖ  ಅಭಿವೃದ್ಧಿಗೆ  ಪಾತ್ರರಾಗಬೇಕು  ಎಂದರು .                           

               ಶಾಲಾ   ವ್ಯವಸ್ಥಾಪಕರಾದ  ಶ್ರೀಯುತ  ಜನಾರ್ದನ  ಮಾಸ್ಟರ್ ಅವರು  "ಇಂದಿನ  ಸ್ಪರ್ಧಾತ್ಮಕ  ಯುಗದಲ್ಲಿ  ನಮ್ಮ ಶಾಲೆಯನ್ನು ಉಳಿಸಿ  ಬೆಳೆಸುವುದು  ತಮ್ಮೆಲ್ಲರ ಕರ್ತವ್ಯ . ಅದಕ್ಕಾಗಿ  ಶಾಲೆಯಲ್ಲಿ  ಹಮ್ಮಿಕೊಂಡ  ಪ್ರತೀ ಚಟುವಟಿಕೆಯನ್ನೂ  ಯಶಸ್ವಿಯಾಗಿ  ನಿರ್ವಹಿಸಲು ಹೆತ್ತವರು  ಸಹಕರಿಸಬೇಕೆಂದು  ತಿಳಿಸಿದರು . ಎಂ . ಪಿ .ಟಿ .ಎ  ಅಧ್ಯಕ್ಷೆ ಶ್ರೀಮತಿ  ಚಂದ್ರಿಕಾ ಅವರು ಶುಭ ಹಾರೈಸಿದರು . ಅಧ್ಯಾಪಕರಾದ ಶ್ರೀ ಪದ್ಮನಾಭ  ನಾಯಕ್ ರವರು ತಮ್ಮ ಪ್ರಾಸ್ತಾವಿಕ  ಭಾಷಣದಲ್ಲಿ  ಶಾಲೆಯಲ್ಲಿ  ಈ   ವರ್ಷ  ಕೈಗೊಳ್ಳುವ ಚಟುವಟಿಕೆಗಳ ಕುರಿತು  ತೀರ್ಮಾನಗಳ ಕುರಿತು ಸವಿವರವಾಗಿ ವಿವರಿಸಿದರು .  ಸಭೆಯಲ್ಲಿ ನೂತನ ವರ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ  ಮಾಡಲಾಯಿತು . ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಕುಂಞಲಿ  ಎಂ ಪಿ ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ ಯಂ  ಅವರು ಅವಿರೋದವಾಗಿ ಆಯ್ಕೆಯಾದರು . ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶಾಲಾ ವ್ಯವಸ್ಥಾಪಕರ ಹಾಗೂ ಶಾಲಾ  ವತಿಯಿಂದ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು . 
                                                                                                                                                                                     ಅಧ್ಯಾಪಕ ಶ್ರೀ ಗಣೇಶ್ ಕಾಮತ್ ಸ್ವಾಗತಿಸಿ ,ಶ್ರೀ ಸಂತೋಷ್ ಕುಮಾರ್ ವಂದಿಸಿದರು. ಮುಖ್ಯೋಪಾಧ್ಯಾಯರಾದ  ಶ್ರೀ ಉಮಾನಾಥ ಭಂಡಾರಿ ಗತ ವರ್ಷದ ವರದಿ ವಾಚಿಸಿದರು .   


No comments:

Post a Comment