Saturday 15 November 2014
ಸರ್ವಶಿಕ್ಷಾ ಅಭಿಯಾನ್ ೨೦೧೪-೨೦೧೫
ರಕ್ಷಕರ ಸಮ್ಮೇಳನ
ತಾ ೧೪-೧೧-೨೦೧೪ ರಂದು ಮುಂಡಿತ್ತಡ್ಕ ಶಾಲೆಯಲ್ಲಿ ರಕ್ಷಕರ ಸಮ್ಮೇಳನವು ಜರಗಿತು . ಎಂ . ಪಿ .ಟಿ .ಎ . ಅಧ್ಯಕ್ಷೆ ಲಿಸಮ್ಮ ಜೋಸೆಫ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು . ವಾರ್ಡ್ ಸದಸ್ಯೆ ಬುಷ್ರ ಸಿದ್ದಿಕ್ ರವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು . ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರ್ ಹಾಗೂ ಸುಬ್ಬಣ್ಣ ರೈ ಯವರು ಸಮಾರಂಭಕ್ಕೆ ಶುಭವನ್ನು ಹಾರೈಸಿದರು . ಮುಖ್ಯ ಶಿಕ್ಷಕಿ ಪದ್ಮಾವತಿಯವರು ಸ್ವಾಗತಿಸಿ , ಶಿಕ್ಷಕ ವಿಜಯ ಕುಮಾರ್ ರವರು ವಂದಿಸಿದರು . ಬಳಿಕ ಸಂಪನ್ಮೂಲ ತರಬೇತುದಾರರಾದ ಪದ್ಮನಾಭ ಮಾಸ್ಟರ್ ರವರು ರಕ್ಷಕರಿಗಾಗಿ ತರಗತಿಯನ್ನು ನಡೆಸಿ ಕೊಟ್ಟರು .
Monday 3 November 2014
ಮುಂಡಿತ್ತಡ್ಕ ಶಾಲೆಯಲ್ಲಿ ಕಲೋತ್ಸವ
ಶಾಲಾ ಮಟ್ಟದ ಕಲೋತ್ಸವವು ತಾ .೩೦/೧೦/೨೦೧೪ ರಂದು ಪಿ.ಟಿ. ಎ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು . ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ತರ್ ರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ ಯವರು ಸ್ವಾಗತಿಸಿ , ಶಿಕ್ಷಕ ಪ್ರಶಾಂತ್ ರೈ ಯವರು ವಂದಿಸಿದರು . ಕಲೋತ್ಸವದ ಕನ್ವೀನರ್ ಸುದಾಮ ಮಾಸ್ತರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು . ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ಆರಂಭ ಗೊಂಡಿತು ..........
Subscribe to:
Posts (Atom)