ಸರ್ವಶಿಕ್ಷಾ ಅಭಿಯಾನ್ ೨೦೧೪-೨೦೧೫
ರಕ್ಷಕರ ಸಮ್ಮೇಳನ
ತಾ ೧೪-೧೧-೨೦೧೪ ರಂದು ಮುಂಡಿತ್ತಡ್ಕ ಶಾಲೆಯಲ್ಲಿ ರಕ್ಷಕರ ಸಮ್ಮೇಳನವು ಜರಗಿತು . ಎಂ . ಪಿ .ಟಿ .ಎ . ಅಧ್ಯಕ್ಷೆ ಲಿಸಮ್ಮ ಜೋಸೆಫ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು . ವಾರ್ಡ್ ಸದಸ್ಯೆ ಬುಷ್ರ ಸಿದ್ದಿಕ್ ರವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು . ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರ್ ಹಾಗೂ ಸುಬ್ಬಣ್ಣ ರೈ ಯವರು ಸಮಾರಂಭಕ್ಕೆ ಶುಭವನ್ನು ಹಾರೈಸಿದರು . ಮುಖ್ಯ ಶಿಕ್ಷಕಿ ಪದ್ಮಾವತಿಯವರು ಸ್ವಾಗತಿಸಿ , ಶಿಕ್ಷಕ ವಿಜಯ ಕುಮಾರ್ ರವರು ವಂದಿಸಿದರು . ಬಳಿಕ ಸಂಪನ್ಮೂಲ ತರಬೇತುದಾರರಾದ ಪದ್ಮನಾಭ ಮಾಸ್ಟರ್ ರವರು ರಕ್ಷಕರಿಗಾಗಿ ತರಗತಿಯನ್ನು ನಡೆಸಿ ಕೊಟ್ಟರು .
No comments:
Post a Comment