FIRST TERM EXAMINATION WILL BE STARTING FROM 21ST OF THIS MONTH.......

Monday 11 July 2016

ಸಂಸ್ಥಾಪಕರ ದಿನಾಚರಣೆ

                        

              ಸಂಸ್ಥಾಪಕರ ದಿನಾಚರಣೆ 






 ಮುಂಡಿತ್ತಡ್ಕ : ವಿದ್ಯಾದಾನವೇ  ದೇಶಸೇವೆಯೆಂದು  ಮನಗಂಡು  ಮುಂಡಿತ್ತಡ್ಕವೆಂಬ  ಕುಗ್ರಾಮದಲ್ಲಿ  ಶಾಲೆಯನ್ನು  ಸ್ಥಾಪಿಸಿ ನಿಸ್ವಾರ್ಥ ಸೇವೆಯನ್ನು  ಕೈಗೊಂಡ  ಶ್ರೀ ಮಂಜಯ್ಯ ಮಾಸ್ತರರ  ಚರಮ ದಿನವಾದ  ಜುಲೈ ೧೧ ನ್ನು  ಸಂಸ್ಥಾಪಕರ ದಿನವನ್ನಾಗಿ  ಆಚರಿಸಲಾಯಿತು . ಮಧ್ಯಾಹ್ನ  ೨. ೦೦ ಗಂಟೆಗೆ  ಮೌನ ಪ್ರಾರ್ಥನೆಯೊಂದಿಗೆ  ಆರಂಭವಾದ  ಸಭೆಯನ್ನು ಮುಗು  ಸಹಕಾರಿ  ಬ್ಯಾಂಕಿನ  ಕಾರ್ಯದರ್ಶಿ  ಶ್ರೀ ಶಂಕರ್ ಭಟ್ ರವರು  ದೀಪ  ಬೆಳಗಿಸಿ  ಉದ್ಘಾಟಿಸಿದರು . ಪಂಚಾಯತ್ ಸದಸ್ಯ  ಶ್ರೀ ಸಿದ್ದಿಕ್ ರವರು  ಸಭೆಯ  ಅಧ್ಯಕ್ಷತೆಯನ್ನು  ವಹಿಸಿದರು . ಶಾಲಾ ವ್ಯವಸ್ಥಾಪಕರಾದ  ಶ್ರೀ ಜನಾರ್ದನ ಮಾಸ್ಟರ್ ,ನಿವೃತ ಮುಖ್ಯೋಪಾಧ್ಯಾಯಿನಿ  ವಿಜಯಲಕ್ಷ್ಯ್ಮಿ ಟೀಚರ್ ,ಕಮಲಾಕ್ಷಿ ಟೀಚರ್ , ಪಿ ಟಿ ಎ ಅಧ್ಯಕ್ಷರಾದ  ಸಂತೋಷ್ ಕುಮಾರ್ , MPTA  ಅಧ್ಯಕ್ಷೆ ಚಂದ್ರಿಕಾ , ಸ್ಟಾಫ್ ಸೆಕ್ರಟರಿ  ಗಣೇಶ್ ಕಾಮತ್   ಮುಂತಾದವರು  ಅತಿಥಿಗಳಾಗಿದ್ದು   ಶುಭಾಶಂಸನೆ ಗೈದರು . ಪ್ರತಿವರ್ಷದಂತೆ   ಶಾಲಾ  ವ್ಯವಸ್ಥಾಪಕರ   ವತಿಯಿಂದ  ೧ ನೇ ತರಗತಿಯ  ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು .               ಮುಖ್ಯ  ಶಿಕ್ಷಕ  ಉಮಾನಾಥ ಭಂಢಾರಿಯವರು ಸ್ವಾಗತಿಸಿ , ಶಿಕ್ಷಕ ವಿಜಯಕುಮಾರ್ ವಂದಿಸಿದರು .  ಸುಧಾಮ ಮಾಸ್ಟರ್  ಕಾರ್ಯಕ್ರಮ  ನಿರೂಪಿಸಿದರು.  ಕಾರ್ಯಕ್ರಮದ  ಕೊನೆಯಲ್ಲಿ  ಸಿಹಿತಿಂಡಿಯನ್ನು  ವಿತರಿಸಲಾಯಿತು . 

No comments:

Post a Comment