ಸಂಸ್ಥಾಪಕರ ದಿನಾಚರಣೆ
ಮುಂಡಿತ್ತಡ್ಕ : ವಿದ್ಯಾದಾನವೇ ದೇಶಸೇವೆಯೆಂದು ಮನಗಂಡು ಮುಂಡಿತ್ತಡ್ಕವೆಂಬ ಕುಗ್ರಾಮದಲ್ಲಿ ಶಾಲೆಯನ್ನು ಸ್ಥಾಪಿಸಿ ನಿಸ್ವಾರ್ಥ ಸೇವೆಯನ್ನು ಕೈಗೊಂಡ ಶ್ರೀ ಮಂಜಯ್ಯ ಮಾಸ್ತರರ ಚರಮ ದಿನವಾದ ಜುಲೈ ೧೧ ನ್ನು ಸಂಸ್ಥಾಪಕರ ದಿನವನ್ನಾಗಿ ಆಚರಿಸಲಾಯಿತು . ಮಧ್ಯಾಹ್ನ ೨. ೦೦ ಗಂಟೆಗೆ ಮೌನ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯನ್ನು ಮುಗು ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಶ್ರೀ ಶಂಕರ್ ಭಟ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು . ಪಂಚಾಯತ್ ಸದಸ್ಯ ಶ್ರೀ ಸಿದ್ದಿಕ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು . ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರ್ ,ನಿವೃತ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಯ್ಮಿ ಟೀಚರ್ ,ಕಮಲಾಕ್ಷಿ ಟೀಚರ್ , ಪಿ ಟಿ ಎ ಅಧ್ಯಕ್ಷರಾದ ಸಂತೋಷ್ ಕುಮಾರ್ , MPTA ಅಧ್ಯಕ್ಷೆ ಚಂದ್ರಿಕಾ , ಸ್ಟಾಫ್ ಸೆಕ್ರಟರಿ ಗಣೇಶ್ ಕಾಮತ್ ಮುಂತಾದವರು ಅತಿಥಿಗಳಾಗಿದ್ದು ಶುಭಾಶಂಸನೆ ಗೈದರು . ಪ್ರತಿವರ್ಷದಂತೆ ಶಾಲಾ ವ್ಯವಸ್ಥಾಪಕರ ವತಿಯಿಂದ ೧ ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು . ಮುಖ್ಯ ಶಿಕ್ಷಕ ಉಮಾನಾಥ ಭಂಢಾರಿಯವರು ಸ್ವಾಗತಿಸಿ , ಶಿಕ್ಷಕ ವಿಜಯಕುಮಾರ್ ವಂದಿಸಿದರು . ಸುಧಾಮ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿಯನ್ನು ವಿತರಿಸಲಾಯಿತು .
No comments:
Post a Comment