ಚೈಲ್ಡ್ ಹೆಲ್ಪ್ ಲೈನ್ ನಿಂದ ಮಾಹಿತಿ ಕಾರ್ಯಾಗಾರ
ಮುಂಡಿತ್ತಡ್ಕ ಶಾಲೆಯಲ್ಲಿ ಚೈಲ್ಡ್ ಹೆಲ್ಪ್ ಲೈನ್ ನಿಂದ ಮಾಹಿತಿ ಶಿಭಿರವು ಇತ್ತೀಚೆಗೆ ನೆರವೇರಿತು . ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯುತ ಉಮಾನಾಥ ಭಂಡಾರಿಯವರು ನೆರವೇರಿಸಿದರು . ಕಾರ್ಯಕ್ರಮದಲ್ಲಿ ಚೈಲ್ಡ್ ಹೆಲ್ಪ್ ಲೈನಿನ ಕಾರ್ಯವೈಖರಿಯ ಬಗ್ಗೆ ಚೈಲ್ಡ್ ಹೆಲ್ಪ್ ಲೈನಿನ ಕಾರ್ಯಕರ್ತ ಪದ್ಮನಾಭರವರು ಮಾಹಿತಿಯನ್ನು ನೀಡಿದರು . ವಿದ್ಯಾರ್ಥಿಗಳು ಎದುರಿಸುವ ವಿವಿಧ ಸಮಸ್ಯೆಗಳಾದ ಮಾನಸಿಕ ಹಿಂಸೆ, ದೈಹಿಕ ಹಿಂಸೆ ,ರೋಗದಿಂದ ನರಳುವವರಿಗೆ ನೀಡುವಂತಹ ಸಹಾಯದ ಬಗ್ಗೆ ವಿವರಿಸಿದರು .
ಶಿಕ್ಷಕ ಪ್ರಶಾಂತ ರೈಯವರು ಸ್ವಾಗತಿಸಿ ವಿಜಯ ಕುಮಾರ್ ಮಾಸ್ಟರ್ ರವರು ವಂದಿಸಿದರು .
No comments:
Post a Comment