ಮುಂಡಿತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ
ಶ್ರೀ ಮಂಜಯ್ಯ ಸ್ಮಾರಕ ಎ. ಯು. ಪಿ. ಶಾಲೆ ಮುಂಡಿತ್ತಡ್ಕದಲ್ಲಿ 71 ನೆೇ ಸ್ವಾತಂತ್ರ್ಯ ದಿನಾಚರಣೆಯನ್ನುವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು . 9.30 ಕ್ಕೆ ಸರಿಯಾಗಿ ಪಿ. ಟಿ .ಎ .ಅಧ್ಯಕ್ಷರಾದ ಶ್ರೀ ಕುಂಞಲಿ ಯವರು ಧ್ವಜಾರೋಹಣ ಗೈದರು . ವಾರ್ಡ್ ಸದಸ್ಯ ಅಬೂಬಕರ್ ಸಿದ್ದಿಕ್ ,ಎಂ ಪಿ ಟಿ ಎ ಅಧ್ಯಕ್ಷೆ ರೇವತಿ ,ನಿವೃತ್ತ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಟೀಚರ್ ,ರಕ್ಷಕರು ಸಭೆಯಲ್ಲಿ ಹಾಜರಿದ್ದರು . ಸಭಾ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರವರು ಶುಭ ಹಾರೈಸುತ್ತಾ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ದೇಶ ಪ್ರೇಮಿಗಳನ್ನು ಸ್ಮರಿಸುತ್ತಾ ಅವರ ಮಾರ್ಗ ದರ್ಶನದಂತೆ ನಡೆದು ಜೀವನವನ್ನು ಪಾವನಗೊಳಿಸೋಣ ಎಂದರು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಕೊಡಲಾಯಿತು . ಸಿಹಿ ತಿಂಡಿ ವಿತರಣೆಯ ಬಳಿಕ ವಿದ್ಯಾರ್ಥಿಗಳು ನಗರದಲ್ಲಿ ಘೋಷಣೆಗಳೊಂದಿಗೆ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ಕಾಮತ್ ರವರು ಸ್ವಾಗತಿಸಿ, ವಿಜಯ ಕುಮಾರನ್ ವಂದಿಸಿದರು.
No comments:
Post a Comment