FIRST TERM EXAMINATION WILL BE STARTING FROM 21ST OF THIS MONTH.......

Thursday 20 July 2017

ರಕ್ಷಕ -ಶಿಕ್ಷಕ ಮಹಾಸಭೆ

ಮುಂಡಿತ್ತಡ್ಕ : ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ ಎ. ಯು . ಪಿ ಶಾಲೆಯ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ತಾ :20.07.17ನೇ ಗುರುವಾರ ಅಪರಾಹ್ನ 2 ಘಂಟೆಗೆ ಸರಿಯಾಗಿ ಪಿ . ಟಿ . ಎ ಅಧ್ಯಕ್ಷ ಶ್ರೀ ಕುಞಲಿ ಅವರ ಅಧ್ಯಕ್ಷತೆಯಲ್ಲಿ ಜರಗಿತು . ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸುತ್ತಾ ಮಾತನಾಡಿದ ಪಂಚಾಯತು ಸದಸ್ಯ ಶ್ರೀ ಅಬೂಬಕ್ಕರ್ ಸಿದ್ದಿಕ್ ಅವರು

 

"ಮಕ್ಕಳ ಅಭಿವೃದ್ಧಿಯ ಜತೆಗೆ ಶಾಲೆಯ ಅಭಿವೃದ್ಧಿ ಯು ಸಾಧ್ಯ . ಶಾಲೆಯ ಎಲ್ಲಾ ಕಾರ್ಯ ಚಟುವಟಿಕೆಯಲ್ಲೂ ಹೆತ್ತವರ ಪಾಲು ಬಲು ಮುಖ್ಯ. ದಶಕಗಳ ಇತಿಹಾಸ ಹೊಂದಿರುವಂತಹ ನಮ್ಮೀ ಶಾಲೆ, ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಿದೆ . ಪ್ರಸ್ತುತ ಶಾಲೆಯ ಅಭಿವೃದ್ಧಿಗೆ ನಮ್ಮೆಲ್ಲರ ಪಾತ್ರ ಅನಿವಾರ್ಯವಾಗಿದೆ .ಅದಕ್ಕೆ ಪೂರಕವಾಗಿ ಪಂಚಾಯತು ಆಡಳಿತ ಮಂಡಳಿಯು ಯಾವಾತ್ತೂ ಬೆನ್ನೆಲುಬಾಗಿ ಇರುವುದೆಂದು ಭರವಸೆಯನ್ನು ನೀಡಿದರು .
ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಜನಾರ್ದನ ಮಾಸ್ಟರ್ ಅವರು

 

"ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಶಾಲೆಯನ್ನು ಉಳಿಸಿ ಬೆಳೆಸುವುದು ತಮ್ಮೆಲ್ಲರ ಕರ್ತವ್ಯ . ಅದಕ್ಕಾಗಿ ಶಾಲೆಯಲ್ಲಿ ಹಮ್ಮಿಕೊಂಡ ಪ್ರತೀ ಚಟುವಟಿಕೆಯನ್ನೂ ಯಶಸ್ವಿಯಾಗಿ ನಿರ್ವಹಿಸಲು ಹೆತ್ತವರು ಸಹಕರಿಸಬೇಕೆಂದು ತಿಳಿಸಿದರು . ಎಂ . ಪಿ .ಟಿ .ಎ ಅಧ್ಯಕ್ಷೆ ಶ್ರೀಮತಿ ರೇವತಿ ಶುಭ ಹಾರೈಸಿದರು . ಅಧ್ಯಾಪಕರಾದ ಶ್ರೀ ಪದ್ಮನಾಭ ನಾಯಕ್ ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಯಲ್ಲಿ ಈ ವರ್ಷ ಕೈಗೊಳ್ಳುವ ಚಟುವಟಿಕೆಗಳ ಕುರಿತು ಸವಿವರವಾಗಿ ವಿವರಿಸಿದರು . . ಸಭೆಯಲ್ಲಿ ನೂತನ ವರ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು . ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಕುಂಞಲಿ , ಎಂ ಪಿ ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ ಯಂ ಅವರು ಪುನರಾಯ್ಕೆಯಾದರು .

ಮುಖ್ಯ ಶಿಕ್ಷಕ ಶ್ರೀ ಗಣೇಶ್ ಕಾಮತ್ ರವರು ಗತವರ್ಷದ ವರದಿ ವಾಚಿಸಿದರು .

 

ಶಿಕ್ಷಕ ದಾಮೋದರ ಮಾಸ್ಟರ್ ಸ್ವಾಗತಿಸಿ ,

ಸೂಸಮ್ಮ ಟೀಚರ್ ವಂದಿಸಿದರು .

 

No comments:

Post a Comment