FIRST TERM EXAMINATION WILL BE STARTING FROM 21ST OF THIS MONTH.......

Tuesday 11 July 2017

                                 ಸಂಸ್ಥಾಪಕರ ದಿನ   


           

ಮುಂಡಿತ್ತಡ್ಕ :ಶ್ರೀ ಮಂಜಯ್ಯ  ಮೆಮೋರಿಯಲ್ ಎ ಯು   ಪಿ  ಶಾಲೆ ಮುಂಡಿತ್ತಡ್ಕದಲ್ಲಿ ಸಂಸ್ಥಾಪಕರಾದ ಶ್ರೀ ಮಂಜಯ್ಯ ಮಾಸ್ಟರವರ ಪುಣ್ಯಸಂಸ್ಮರಣಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಊರಿನ ಹಿರಿಯ ನಾಗರಿಕರಾದ ಮದನಪ್ಪ ಆಳ್ವರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. 

  
ಒಂದು ಕಾಲದಲ್ಲಿ ನಮ್ಮೂರಲ್ಲಿ ಬಹು ಪರಿಶ್ರಮದಿಂದ  ಶಾಲೆಯನ್ನು ಸ್ಥಾಪಿಸಿ ವಿದ್ಯಾದಾನವನ್ನು ಮಾಡಿ  ತನ್ಮೂಲಕ ಜನರನ್ನು ಜಾಗ್ರತಗೊಳಿಸಿ ಪ್ರಸ್ತುತ ಎಲ್ಲ ರೀತಿಯ ಮೂಲಭೂತ ಸೌಕರ್ಯ ಗಳನ್ನೂ ಲಭಿಸುವಲ್ಲಿ ಕಾರಣೀಭೂತರಾದ  ಮಹಾತ್ಮರ ಸಂಸ್ಮರಣಾ  ಕಾರ್ಯಕ್ರಮದಲ್ಲಿ  ಭಾಗಿಯಾಗಲು ಯೋಗ ಲಭಿಸಿದ್ದು ತಮ್ಮ ಭಾಗ್ಯವೆಂದರು.   ವಾರ್ಡು ಸದಸ್ಯರಾದ ಶ್ರೀ ಯುತ ಸಿದ್ದಿಕ್ ರವರು ಅಧ್ಯಕ್ಷತೆ ವಹಿಸಿದರು. ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ,ನಿವೃತ್ತ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ವಿಜಯಲಕ್ಶ್ಮಿಟೀಚರ್ , ಮುರಹರಿ ಮಾಸ್ಟರ್,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಯುತ ಉಮಾನಾಥ ಭಂಡಾರಿ  ಮೊದಲಾದವರು  ಶುಭಾಶಂಸನೆ ಗೈದರು.



 










 ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯುತ ಗಣೇಶ್ ಮಾಸ್ಟರ ರವರು ಸ್ವಾಗತಿಸಿ, ವಿಜಯಕುಮಾರರವರು ವಂದಿಸಿದರು.ಶಿಕ್ಷಕ ಪದ್ಮನಾಭ ನವರು ಕಾರ್ಯಕ್ರಮವನ್ನು ನಿರೂಪಿಸಿದರು .


 

No comments:

Post a Comment