ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೇತ್ರತ್ವದಲ್ಲಿ ಜರಗಿದ ವಾಚನಾ ಸಪ್ತಾಹದ ಸಮಾರೋಪ ಸಮಾರಂಭವು 25 .06.2015 ಶುಕ್ರವಾರದಂದು ಮುಂಡಿತ್ತಡ್ಕ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು . ಮಕ್ಕಳ ಆಸ್ವಾದನಾ ಟಿಪ್ಪಣಿ " ಚಿಗುರು " ಎಂಬ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸುವುದರ ಮೂಲಕ ಶಾಲಾ ವ್ಯವಸ್ಥಾಪಕರು ಸಮಾರಂಭವನ್ನು ಉದ್ಘಾಟಿಸಿದರು . ಸ್ಟಾಫ್ ಸೆಕ್ರೆಟರಿ ಉದಯಭಾನು ಮಾಸ್ಟರ್ ರವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು . ವಿದ್ಯಾರ್ಥಿಗಳಿಂದ ಓದಿನ ಟಿಪ್ಪಣಿ ನಡೆಯಿತು .ವಾಚನಾ ವಾರದ ಅಂಗವಾಗಿ ನಡೆಸಲ್ಪಟ್ಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಟೀಚರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ದಾಮೋದರ ಮಾಸ್ಟರ್ ರವರು ಸ್ವಾಗತಿಸಿ , ಪದ್ಮನಾಭ ಮಾಸ್ಟರ್ ರವರು ಧನ್ಯವಾದವಿತ್ತರು . ಸುದಾಮ ಮಾಸ್ಟರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು .
No comments:
Post a Comment