ಮುಂಡಿತ್ತಡ್ಕ ಶಾಲೆಯಲ್ಲಿ ಸಂಸ್ಥಾಪಕರ ಸಂಸ್ಮರಣಾ ದಿನಾಚರಣೆ
ಮುಂಡಿತ್ತಡ್ಕ : ಶಾಲಾ ಸಂಸ್ಥಾಪಕರಾದ ದಿವಂಗತ ಶ್ರೀ ಮಂಜಯ್ಯ ಮಾಸ್ತರರ 44 ನೇ ಸಂಸ್ಮರಣಾ ದಿನವನ್ನು ಯಸ್ .ಯಂ . ಯಂ . ಎ . ಯು . ಪಿ . ಶಾಲೆಯಲ್ಲಿ ಆಚರಿಸಲಾಯಿತು . ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಕೈಲಾಸಮೂರ್ತಿಯವರು, ಶ್ರೀ ಮಂಜಯ್ಯ ಮಾಸ್ತರರು " ಗ್ರಾಮೀಣ ಪ್ರದೇಶದ ಜನರ ಏಳ್ಗೆಗೆ ಕಾರಣವಾದ ಒಬ್ಬ ಮಹಾನ್ ವ್ಯಕ್ತಿ ಅವರನ್ನು ನೆನಪಿಸಿಕೊಳ್ಳುವುದು ಅವರ ಆದರ್ಶವನ್ನು ಪಾಲಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ"ಎಂದರು .
ಅನುಸ್ಮರಣಾ ಮಾತುಗಳನ್ನಾಡಿದ ಶಾಲಾ ವ್ಯವಸ್ಥಾಪಕ ಶ್ರೀಯುತ ಜನಾರ್ದನ ಮಾಸ್ತರ್ "ಶ್ರೀ ಮಂಜಯ್ಯ ಮಾಸ್ತರರು ಒಬ್ಬ ಧೀಮಂತ ವ್ಯಕ್ತಿ . ಅತ್ಯಂತ ಹಿಂದುಳಿದ ಈ ಗ್ರಾಮೀಣ ಪ್ರದೇಶದ ಜನರಿಗೆ ಅಕ್ಷರ ಜ್ಞಾನವನ್ನು ಕೊಡಿಸಲು ವಿದ್ಯಾಸಂಸ್ಥೆ ಪ್ರಾರಂಭಿಸಿದ ಮಹಾನ್ ವ್ಯಕ್ತಿ "ಎಂದರು . ಪಿ ಟಿ ಎ . ಅಧ್ಯಕ್ಷ ಸಂತೋಷ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು . ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಟೀಚರ್ ,ಕಮಲಾಕ್ಷಿ ಟೀಚರ್ , ಅಪ್ಪಣ್ಣ ಮಾಸ್ಟರ್ , ಉದಯಭಾನು ಮಾಸ್ಟರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ಶ್ರೀ ಮಂಜಯ್ಯ ಮಾಸ್ತರರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು . ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಟೀಚರ್ ಸ್ವಾಗತಿಸಿ , ಅಧ್ಯಾಪಕ ವಿಜಯಕುಮಾರನ್ ವಂದಿಸಿದರು , ಶಿಕ್ಷಕ ಉಮಾನಾಥ ಭಂಡಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು . ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿಯನ್ನು ವಿತರಿಸಲಾಯಿತು .
No comments:
Post a Comment