FIRST TERM EXAMINATION WILL BE STARTING FROM 21ST OF THIS MONTH.......

Friday 10 July 2015

ವಿದ್ಯಾರಂಗ  ಕಲಾ ಸಾಹಿತ್ಯ ವೇದಿಕೆ  ಮತ್ತು ವಿವಿಧ ಕ್ಲಬ್ ಗಳ                                      ಉದ್ಘಾಟನೆ








               ಮುಂಡಿತ್ತಡ್ಕ :ಯಸ್.ಯಂ.ಯಂ.ಎ.ಯು.ಪಿ  ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಹಾಗೂ ವಿವಿಧ ಕ್ಲಬ್ ಗಳ  ಉದ್ಘಾಟನೆ ನಡೆಯಿತು . ಶಾಲಾ ಮ್ಯಾನೇಜರ್  ಜನಾರ್ದನ ಮಾಸ್ಟರ್ ಉದ್ಘಾಟನೆ ಮಾಡುತ್ತಾ ಮಕ್ಕಳಲ್ಲಿ ಅಡಗಿಕೊಂಡಿರುವ ಸುಪ್ತ ಪ್ರತಿಭೆಯನ್ನು ಹೊರಗೆ ತರುವುದೆ,ಇಂತಹ ವೇದಿಕೆ ಹಾಗು ಕ್ಲಬ್ ಗಳ ಉದ್ದೇಶವಾಗಿದೆ . ಎಲ್ಲಾ ಮಕ್ಕಳೂ ಇದನ್ನು ಚೆನ್ನಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿತನುಡಿದರು . ಅಧ್ಯಾಪಕ ಉದಯಭಾನು ಮಾಸ್ಟರ್ ಸಭೆಯ ಅಧ್ಯಕ್ಷತೆ ವಹಿಸಿದರು.ಸುಧಾಮ ಮಾಸ್ಟರ್ ಶುಭಹಾರೈಸಿದರು .                                                          

                 ಉದ್ಘಾಟನೆಯ ಅಂಗವಾಗಿ ವಿದ್ಯಾರ್ಥಿಗಳು ಹಾಗು ಅಧ್ಯಾಪಕರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಿತು . ಒಂದು ಇಂದ್ರಜಾಲಕಾರನ ನಿರೂಪಣೆಯಂತೆ ಅಧ್ಯಾಪಕ ಪಧ್ಮನಾಭ ನಾಯಕ್ ನಡೆಸಿಕೊಟ್ಟ ಪ್ರಯೋಗವು ವಿದ್ಯಾರ್ಥಿಗಳನ್ನು ಕೌತುಕ ಲೋಕಕ್ಕೆ ಕೊಂಡೊಯ್ಯಿತು.
        
                 ಅಧ್ಯಾಪಕ ವಿಜಯಕುಮಾರ್ ಸ್ವಾಗತಿಸಿ, ಪಧ್ಮನಾಭ ನಾಯಕ್ ವಂದಿಸಿದರು.ದಾಮೋದರ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.     


        ಪ್ರಯೋಗದ    ಮೂಲಕ    ವಿಜ್ಞಾನ   ಸಂಘವನ್ನು    ಉದ್ಘಾಟಿಸುತ್ತಿರುವ 
                               ಶಿಕ್ಷಕ  ಪದ್ಮನಾಭ    ನಾಯಕ್ ರವರು ......    







  

No comments:

Post a Comment