FIRST TERM EXAMINATION WILL BE STARTING FROM 21ST OF THIS MONTH.......

Tuesday 10 October 2017






                                         ನಾಡ ಹಬ್ಬ 

                     ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ದಸರಾವನ್ನು ಕನ್ನಡ ನಾಡ ಹಬ್ಬವನ್ನಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ರವರು ವಹಿಸಿ ಮಾತಾಡಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಟೀಚರು ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಸದಸ್ಯ ಶ್ರೀ ಸದಾಶಿವ ರೈ ಪುತ್ತಿಗೆ ಮುಖ್ಯ ಅಥಿತಿಯಾಗಿದ್ದರು. 
                ದಸರಾವನ್ನು ನಾಡಹಬ್ಬನ್ನಾಗಿ ಆಚರಿಸಿದ ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ಹಾಗು ಅಧ್ಯಾಪಕ ವೃಂದದಿಂದ ನಾಡಗೀತೆಗಳು ಮನರಂಜಿಸಿದವು  ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯೋಪಾದ್ಯಾಯರಾದ ಶ್ರೀ ಗಣೇಶ ಕಾಮತ್ ಸ್ವಾಗತಿಸಿ ಅಧ್ಯಾಪಿಕೆ ಕಾಲಾವತಿಯವರು ವಂದಿಸಿದರು. ಅಧ್ಯಾಪಕರಾದ ಪದ್ಮನಾಭ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು,ದಾಮೋದರ ಮಾಸ್ಟರ್ ನಾಡಹಬ್ಬದ ಮಹತ್ವವನ್ನು ವಿವರಿಸಿದರು. ಅಲ್ಲದೆ ನಾಡಹಬ್ಬ ಪ್ರಯುಕ್ತ ಶಾಲೆಯಲ್ಲಿ ಶಾರದಾ ಪೂಜೆಯನ್ನು ಏರ್ಪಡಿಸಲಾಗಿತ್ತು. ಹತ್ತಿರದ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆಯನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ ಮಹಾಪೂಜೆಯೊಂದಿಗೆ ಪ್ರಸಾದವನ್ನು ಹಂಚಲಾಯಿತು. 





 

 





No comments:

Post a Comment